ಇಹ-ಪರ

ಆ ದಂಡೆ ಬೇಕು ಅದ ಸೇರಬೇಕು,
ಈ ನದಿಯ ದಾಟಬೇಕು
ಈ ನದಿಯು ಬೇರೆ ಆ ದಂಡೆ ಬೇರೆ,
ಎಂಬುದನು ತೊರೆಯಬೇಕು || ೧ ||

ದಂಡೆಯಿದೆ ನದಿಗೆ ಆಸರೆಯಿತ್ತು
ದಂಡೆಗಿದು ನೀರು ಕೊಟ್ಟು
ತಣಿಸುವುದು ವನಕೆ ಉಣಿಸುವುದು ಅದರ
ಬಾಳಿರದು ಇದನು ಬಿಟ್ಟು || ೨ ||

ಗರ್ಭಗುಡಿ ಸೇರೆ ದ್ವಾರವನು ದಾಟು,
ಪೂಜಾರಿ ಮಧ್ಯ ಶಿವಗೆ
ಅರಮನೆಯ ಒಳಗೆ ದಾಟಲಿಕೆ ಮೊದಲು
ಬಾಗಿಲಲಿ ಭಟನು ಹೊರಗೆ || ೩ ||

ಮರಹತ್ತಲಿಕ್ಕೆ ಹೂಹಣ್ಣಗಳನು
ಪಡೆಯಲಿಕೆ ಸವಿಯಲಿಕ್ಕೆ
ಬೇರಿಹುದು ದೊಡ್ಡ ಕೊಂಬೆಗಳು ಮತ್ತೆ
ಮೊದಲ ಋಣಪಡೆಯಲಿಕ್ಕೆ || ೪ ||

ಇಹವನ್ನು ಬಿಟ್ಟು ಪರವಲ್ಲಿ ಬಂತು
ಇಹಬೇರು ಪರವು ಮರವು
ಒಳ ಹಸಿವಿಗನ್ನ ಕೊಡುವುದಕೆ ಮುಂಚೆ
ಹೊರ ಜಠರ ಬೇಡುತಿಹುದು || ೫ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಲ್ಲಾ ನಿದ್ರಿಸುತಾನೆ ಇಲ್ಲಾ
Next post ಅಪೂರ್ವ ಪ್ರೇಮ ಕವಿ W B Yeats

ಸಣ್ಣ ಕತೆ

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

cheap jordans|wholesale air max|wholesale jordans|wholesale jewelry|wholesale jerseys